FLASH NEWS

WELCOME TO GWLPS KUMBLA BLOG. BLOG ADRESS IS........... 11329gwlpskumbla.blogspot.in animated-school-image-0007 Thank U
2016 INTERNATIONAL YEAR OF PULSES

Wednesday 14 January 2015

ಧರಣಿ ಮುಷ್ಕರ.

ಜನವರಿ 17ರಂದು ಕನ್ನಡ ಅಧ್ಯಾಪಕ ಸಂಘದ ವತಿಯಿಂದ
ಧರಣಿ ಮುಷ್ಕರ.

ಕಾಸರಗೋಡು ಜಿಲ್ಲೆಯ ಕನ್ನಡ ಶಾಲೆಗಳಿಗೆ ಸಂವಿಧಾನ ಬದ್ಧವಾಗಿ ನೀಡಬೇಕಾದ ಅನೇಕ ಸೌಲಭ್ಯಗಳನ್ನು ನೀಡಲು ಹಿಂದೇಟು ಹಾಕುತ್ತಿರುವ ಅಧಿಕೃತರ ಮಲತಾಯಿ ಧೋರಣೆಯ ವಿರುದ್ಧ ನ್ಯಾಯಯುತ ಹೋರಾಟ ಮಾಡಬೇಕಾಗಿದೆ. ಆದುದರಿಂದ 17-01-2015 ನೇ ತಾರೀಕು ಶನಿವಾರದಂದು ಕಾಸರಗೋಡು ಜಿಲ್ಲೆಯ ನಾಲ್ಕು ಉಪಜಿಲ್ಲಾ ಕಛೇರಿಗಳ ಎದುರು ಧರಣಿ ಮುಷ್ಕರವನ್ನು ನಡೆಸಲು ತೀರ್ಮಾನಿಸಲಾಗಿದೆ. ಎಲ್ಲಾ ಶಿಕ್ಷಕ ಬಂಧುಗಳು ಈ ಮುಷ್ಕರವನ್ನು ಯಶಸ್ವಿಗೊಳಿಸಬೇಕಾಗಿದೆ. ಹೊಸದುರ್ಗದಲ್ಲಿ ಕನ್ನಡ ಶಿಕ್ಷಕ ಹುದ್ದೆಯನ್ನು ತೊಡೆದು ಹಾಕಿದುದರ ವಿರುದ್ಧ ನಡೆಯುವ ಎಲ್ಲಾ ಹೋರಾಟಗಳಿಗೂ ಅಧ್ಯಾಪಕ ಸಂಘ ತನ್ನ ಬೆಂಬಲ ವ್ಯಕ್ತಪಡಿಸಿದೆ. ಎ೦ದು ಕೇಂದ್ರಾಧ್ಯಕ್ಷ ಟಿ.ಡಿ.ಸದಾಶಿವ ರಾವ್ ನುಡಿದರು.ಬೀರಂತಬೈಲಿನಲ್ಲಿ ನಡೆದ ಕೇಂದ್ರ ಸಭೆಯಲ್ಲಿ ಕನ್ನಡ ಅಧ್ಯಾಪಕ ಸಂಘದ ಕ್ಯಾಲೆಂಡರನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು. ಉಪಾಧ್ಯಕ್ಷರಾದ ಮಹಾಲಿಂಗೇಶ್ವರ ಭಟ್ ಎ೦.ವಿ. ಪ್ರಸ್ತಾವನೆ ನುಡಿದರು. ಕೆ.ವಿ.ಸತ್ಯನಾರಾಯಣ ರಾವ್, ವಿಶಾಲಾಕ್ಷ ಪುತ್ರಕಳ, ಪ್ರಭಾವತಿ ಕೆದಿಲ್ಲಾಯ ಪುಂಡೂರು, ರಾಜೇಶ್ವರ ಸಿ.ಎಚ್, ಪುಷ್ಪ ಕುಮಾರಿ, ಶ್ರೀನಿವಾಸ ರಾವ್, ಪ್ರೀತಂ ಎ.ಕೆ, ಪ್ರದೀಪ್ ಕುಮಾರ್, ಕಷ್ಣೋಜಿ ರಾವ್ ಎ, ಅಶೋಕ್ ಕೊಡ್ಲಮೊಗರು, ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸೂಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ, ಪದ್ಮಾವತಿ ಎ೦ ವಂದಿಸಿದರು.

27-12-2014
ಜನವರಿ 17ರಂದು ಕೇರಳ ಪ್ರಾಂತ್ಯ ಕನ್ನಡ ಅಧ್ಯಾಪಕ ಸಂಘದ ವತಿಯಿಂದ
ಧರಣಿ ಮುಷ್ಕರ.
ದಿನಾಂಕಃ 17-01-2015 ನೇ ತಾರೀಕು ಶನಿವಾರ
ಸ್ಥಳಃಕಾಸರಗೋಡು ಜಿಲ್ಲೆಯ ನಾಲ್ಕು ಉಪಜಿಲ್ಲಾಶಿಕ್ಷಣಾಧಿಕಾರಿಗಳ ಕಛೇರಿಗಳ ಎದುರು
ಪ್ರಧಾನ ಬೇಡಿಕೆಗಳು.
* ಅಂಗನವಾಡಿಗಳಲ್ಲಿ ಕನ್ನಡದ ಅವಗಣನೆ ನಿಲ್ಲಿಸಬೇಕು.
* ಸರಕಾರದಿಂದ ವಿತರಿಸಲಾಗುವ ರಶೀದಿ, ಅರ್ಜಿ ನಮೂನೆ,ಮತ್ತು     ಮಾಹಿತಿ ಪತ್ರಗಳನ್ನು ಕನ್ನಡದಲ್ಲಿ ನೀಡಬೇಕು.
    * ಜಿ.ಎಚ್.ಎಸ್.ಎಸ್. ಹೊಸದುರ್ಗದಲ್ಲಿ ಸರಕಾರಿ ಆದೇಶದನ್ವಯ ನೆಲೆನಿಂತಿದ್ದ ಶಿಕ್ಷಕ ಹುದ್ದೆಯನ್ನು * ವಿನಾಕಾರಣ ತೊಡೆದುಹಾಕಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
    * ಕನ್ನಡ ಶಿಕ್ಷಕರಿಗೆ ವಿತರಿಸಬೇಕಾದಪಠ್ಯ ಪುಸ್ತಕ ಕೈಪಿಡಿಗಳನ್ನು ಕೂಡಲೇ ಒದಗಿಸಿರಿ.
    * ಇನ್ನೂ ಭಾಷಾಂತರಗೊಳ್ಳದ ಕೈಪಿಡಿಗಳ ಭಾಷಾಂತರವಾಗಲಿ
* ಕನ್ನಡ ಮಾಧ್ಯಮ ಮಕ್ಕಳಿಗೆ ಕಲಿಸಲು ಭಾಷೆತಿಳಿಯದ ಶಿಕ್ಷಕರ        ನೇಮಕಾತಿ ಸಲ್ಲದು.
*ಎಲ್ಲಾ ಕನ್ನಡ ಶಿಕ್ಷಕರಿಗೂ ಬ್ಲೆ೦ಡ್ ತರಬೇತಿ ನೀಡಿ.
* ಎಲ್ಲಾ ಬಿ.ಆರ್.ಸಿ.ಗಳಲ್ಲಿ ಸಾಕಷ್ಟು ಕನ್ನಡ ತರಬೇತುದಾರರನ್ನು ನೇಮಿಸಿರಿ.
* ಆರ್.ಎ೦.ಎಸ್..ಶಾಲೆಗಳಿಗೆ ಸೌಕರ್ಯ ಕಲ್ಪಿಸಿರಿ.
ಭಾಗವಹಿಸಿರಿ ಯಶಸ್ವಿಗೊಳಿಸಿರಿ

 

No comments:

Post a Comment